ಪಿ.ವೈ.ಪಿ.ಎ. ಕರ್ನಾಟಕ ರಾಜ್ಯ ಯೌವನಸ್ತರ ಶಿಬಿರ

ಪಿ.ವೈ.ಪಿ.ಎ. ಕರ್ನಾಟಕ ರಾಜ್ಯ ಯೌವನಸ್ತರ ಶಿಬಿರ

ಕರ್ನಾಟಕ : ಪಿ.ವೈ.ಪಿ.ಎ. ಕರ್ನಾಟಕ ರಾಜ್ಯ ಘಟಕದ ನಾಯಕತ್ವದಲ್ಲಿ ಕನ್ನಡ ಕ್ಯಾಂಪ್ ಶಿವಮೊಗ್ಗದ ಸನ್ನಿಧಿ ಕ್ಯಾಂಪ್ ಸೆಂಟರಿನಲ್ಲಿ ಪ್ರಾರಂಭವಾಯಿತು. ಏಪ್ರಿಲ್‌ 18, 19 ದಿನಗಳಲ್ಲಿ ನಡೆಸಲಾಗುವ ಶಿಭಿರವನ್ನು ಕರ್ನಾಟಕ ರಾಜ್ಯ ಪಿ.ವೈ.ಪಿ.ಎ. ಅಧ್ಯಕ್ಷರಾದ ಜೋಬಿ ಜೋಸೆಫ್‌ ಅವರು ದೇವರ ಹಸ್ತದಲ್ಲಿ ಪ್ರಾರ್ಥನೆ ಮಾಡಿ ಸಮರ್ಪಿಸಿದರು. ಕರ್ನಾಟಕ ರಾಜ್ಯದ ವಿವಿಧ ಪ್ರಾಂತ್ಯಗಳಿಂದ 200 ರಿಂದ ಹೆಚ್ಚು ಯೌವನಸ್ಥರು ಪಾಲುಗೊಳ್ಳುವ ಈ ಕ್ಯಾಂಪಿನಲ್ಲಿ ಕರ್ತನಾದ ಯೇಸುವಿನ ಎರಡನೆಯ ಬರುವಿಕೆಯನ್ನು ವಿವರಿಸುವ "ಇಗೋ ನಿನ್ನ ರಾಜನು" ಎಂಬ ವಿಷಯ ಮೂಲಕವಾಗಿ ಪಾಸ್ಟರ್‌. ಸಂತೋಷ್‌ ಕೆ.‌ ಚಾಕೋ, ಮೈಸೂರು ಬೋಧನೆಗಳನ್ನು ನೀಡುತ್ತಾರೆ. ಈ ಕ್ಯಾಂಪಿನಲ್ಲಿ ವಿವಿಧ ಸೆಂಟರುಗಳಿಂದ ಯೌವನಸ್ತರ ತಂಡಗಳು ಆರಾಧನಗೆ ನಾಯಕತ್ವವನ್ನು ವಹಿಸಲಿದ್ದಾರೆ. ಐ.ಪಿ.ಸಿ. ಕರ್ನಾಟಕ ರಾಜ್ಯದ ಮಿಷನ್‌ ನಿರ್ದೇಶಕರು ಪಾಸ್ಟರ್‌ ಕೆ.ವಿ. ಜೋಸ್‌ ಅವರು ಅಂತಿಮ ಭಾಗದ ಸಂಧೇಶವನ್ನು ನೀಡಲಿದ್ದಾರೆ. 

ಜೆರಿನ್‌ ಎಬ್ರಹಾಂ, ‌ಜಿನ್ಸನ್ ಪಿ. ಥೋಮಸ್, ಜಸ್ಟಿನ್‌ ಮಾಥ್ಯು, ರೈನು ಸ್ಯಾಮ್ ಮತ್ತು ಸೌಮ್ಯ ಜೋಸಫ್‌ ಮುಂತಾದವರು ನಾಯಕತ್ವವನ್ನು ವಹಿಸಲಿದ್ದಾರೆ.